ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಉಚ್ಚಿಲ ದೇವಾಲಯವು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪಡ್ಡಾಯಿ ಮುಕುಡು ಕುಲ್ದಿನೇರ್, ಗುಡ್ಡೆ ದಿಟ್ಟಿನಾರ್, ಒಡೆಯ, ಉಳ್ಳಾಯೆ ಮತ್ತು ಈಶ್ವರ ದೇವೆರ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಉಡುಪಿಯಿಂದ ಉಚ್ಚಿಲ ದೇವಸ್ಥಾನದ ಅಂತರ ೧೯ ಕಿ.ಮೀ. ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿದೆ. == ದೇವಸ್ಥಾನದ ಬಾಗಿಲು ತೆರೆಯುವ ಮತ್ತು ಮುಚ್ಚುವ ಸಮಯ == ಬೆಳಿಗ್ಗೆ ೬:೦೦ ರಿಂದ ೧೨:೩೦ ವರೆಗೆ ಮತ್ತು ಮಧ್ಯಾಹ್ನ ೪:೦೦ ರಿಂದ ಸಂಜೆ ೭:೫೦ ಮತ್ತು ದೇವಾಲಯದ ಪ್ರಮುಖ ಪೂಜೆಗಳನ್ನು ಬೆಳಿಗ್ಗೆ ೬:೩೦, ೮:೩೦ ಮತ್ತು ಸಂಜೆ ೭:೦೦ ಗಂಟೆಗೆ ನಡೆಸಲಾಗುತ್ತದೆ.ಪ್ರಮುಖ ಹಬ್ಬಗಳು ಮತ್ತು ಆಚರಣೆಗಳಲ್ಲಿ ದೇವಾಲಯವು ಇಡೀ ದಿನ ತೆರೆದಿರುತ್ತದೆ. == ಹಿಂದೂ ಪುರಾಣಗಳಲ್ಲಿ ಉಚ್ಚಿಲ ದೇವಾಲಯದ ಕಥೆ == ಹಳೆಯ ಹಿಂದೂ ನಂಬಿಕೆಗಳ ಪ್ರಕಾರ, ಉಚ್ಚಿಲ ದೇವಾಲಯದಲ್ಲಿರುವ ಶಿವಲಿಂಗವನ್ನು ಶಿವನ ಕಟ್ಟಾ ಭಕ್ತನಾದ ಖರಾಸುರನು ಸ್ಥಾಪಿಸಿದನು. ಖರ ಮತ್ತು ರಟ್ಟ ಎಂಬ ಇಬ್ಬರು ರಾಕ್ಷಸರ ಕಥೆಯು ಸ್ಕಂದ ಪುರಾಣದಲ್ಲಿ ಕಂಡುಬರುತ್ತದೆ. == ಉಚ್ಚಿಲ ದೇವಾಲಯದಲ್ಲಿ ಪೂಜಿಸಲ್ಪಡುವ ಮುಖ್ಯ ದೇವತೆಗಳು == ಮುಖ್ಯ ಶಿವಲಿಂಗ ಮತ್ತು ಪಾಣಿಪೀಠವು ಸುಮಾರು ೫ ಅಡಿ ಎತ್ತರವಿದ್ದು, ನಿಂತಿರುವ ಭಂಗಿಯಲ್ಲಿ ಪೂಜೆಯನ್ನು ಮಾಡಲಾಗುತ್ತದೆ. ಮಕ್ಕಳನ್ನು ಹೊಂದಲು ಬಯಸುವ ದಂಪತಿಗಳ ಪ್ರಾರ್ಥನೆಯನ್ನು ದೇವರು ಪೂರೈಸುತ್ತಾನೆ ಎಂಬ ಬಲವಾದ ನಂಬಿಕೆ ಇದೆ.ಸಾಂಪ್ರದಾಯಿಕ ಸಂಸ್ಕೃತಿಯ ಪ್ರಕಾರ ದೇವರನ್ನು ಭೇಟಿಯಾಗಲು ಜಾರಂದಾಯ ದೈವ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಲಾಗುತ್ತದೆ.ಪ್ರಸ್ತುತ ದೇವಾಲಯವು ೯ ನೇ ಶತಮಾನದ ಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.ತೀರ್ಥ ಮಂಟಪದಲ್ಲಿರುವ ನಂದಿ ಶಿಲ್ಪವು ಆಭರಣಗಳಿಲ್ಲದೆ ಸರಳವಾಗಿದೆ. ಜಾನುವಾರುಗಳ ಸಂರಕ್ಷಕನಾಗಿ ನಂದಿಯನ್ನು ಸಂಕೇತಿಸುವ ಮೂರ್ತಿ ನಂದಿಯ ಮೇಲೆ ಬೆಣ್ಣೆ ಮತ್ತು ತುಪ್ಪದ ಪದರಗಳನ್ನು ಅನ್ವಯಿಸಲಾಗುತ್ತದೆ.ದೇವಾಲಯದ ಮುಖ್ಯ ಉಪ ದೇವತೆ ಗಣೇಶ. ಮೂರ್ತಿಯು ಪರಶು, ದಂತ, ಪಾಶ ಮತ್ತು ಅಂಕುಶಗಳನ್ನು ಹಿಡಿದಿರುವ ನಾಲ್ಕು ತೋಳುಗಳನ್ನು ಹೊಂದಿದೆ.ಮುಖ್ಯ ದೇವಾಲಯದಿಂದ ಉತ್ತರ ದಿಕ್ಕಿಗೆ ರಕ್ತೇಶ್ವರಿ ದೇವಿಯ ಗುಡಿ ಮತ್ತು ಗರ್ಭಗುಡಿಯ ಪೂರ್ವ ದಿಕ್ಕಿಗೆ ನಾಗ ದೇವರ ಗುಡಿ ಕಂಡುಬರುತ್ತದೆ. == ದೇವಾಲಯದ ವಾಸ್ತುಶಿಲ್ಪ == ದೇವಾಲಯವು ವಿಶಾಲವಾದ ಗರ್ಭಗುಡಿಯನ್ನು ಹೊಂದಿದ್ದು ಅದು ಆಯತಾಕಾರದ ಆಕಾರದಲ್ಲಿದೆ. ದೇವಾಲಯದ ಸಂಕೀರ್ಣವು ಸುತ್ತು ಪೌಳಿ, ಬಲಿ ಪೀಠ ಮತ್ತು ದ್ವಜಸ್ತಂಭವನ್ನು ಹೊಂದಿದೆ. ಉತ್ತರ ದಿಕ್ಕಿಗೆ ದೇವಾಲಯದ ಕೊಳವು ಓಲಗ ಮಂಟಪ ಮತ್ತು ಮುಖ ಮಂಟಪಗಳನ್ನು ಹೊಂದಿದೆ. == ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು == ಕಾರ್ತಿಕ ಮಾಸದಲ್ಲಿ (ನವೆಂಬರ್ - ಡಿಸೆಂಬರ್) ೪ ಸೋಮವಾರಗಳಂದು ದೀಪೋತ್ಸವ ಮತ್ತು ರಂಗ ಪೂಜೆ. ಮಹಾ ಚೌತಿಯ ದಿನದಂದು ಗಣಪತಿಗೆ ೧೦೮ ತೆಂಗಿನಕಾಯಿಗಳ ಗಣಯಾಗ ಅರ್ಪಣೆ. ಆಷಾಢ ಮಾಸದಲ್ಲಿ (ಜೂನ್ - ಜುಲೈ) ಗಣೇಶನಿಗೆ ಅಪ್ಪ ಸೇವೆ. ಶ್ರಾವಣ ಮಾಸದಲ್ಲಿ ಹೂವಿನ ಪೂಜೆ ಮತ್ತು ಸೀಯಾಳಾಭಿಷೇಕ. ಮಹಾ ಶಿವರಾತ್ರಿ ರಥೋತ್ಸವ ಶ್ರೀ ಮನ್ಮಹಾರಥೋತ್ಸವ ಶ್ರೀ ಬ್ರಹ್ಮಲಿಂಗೇಶ್ವರ ಆಲಡೆಯಲ್ಲಿ ವಾರ್ಷಿಕ ಮಹೋತ್ಸವ. ಹಬ್ಬ ಹರಿದಿನಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ದೇವರ ಪ್ರಸಾದವಾಗಿ ನೀಡಲಾಗುತ್ತದೆ. ಭಕ್ತರು ದೇವಸ್ಥಾನಕ್ಕೆ ಅಕ್ಕಿ, ತೆಂಗಿನಕಾಯಿ, ಎಣ್ಣೆ, ತರಕಾರಿಗಳನ್ನು ಅರ್ಪಿಸುತ್ತಾರೆ. == ಉಲ್ಲೇಖಗಳು ==